ಕನ್ನಡದ ಗಜಲ್ ಕವಿ. ಇವರು ಕನ್ನಡದ ಸಾಹಿತಿ. ಇವರು ೧೯೯೨ರಲ್ಲಿ ತಮಗೆ ನೀಡಲಾಗಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಭ್ರಷ್ಟ ಸರಕಾರ, ಜನೋಪಯೋಗಿಯಗಿಲ್ಲದ ಸರಕಾರದಿಂದ ಪ್ರಶಸ್ತಿ ಪಡೆಯುವುದಿಲ್ಲವೆಂದು ಹೇಳಿ ತಿರಸ್ಕರಿಸಿದ್ದರು. ಇವರು ೨೦೦೬ರಲ್ಲಿ ಬೀದರದಲ್ಲಿ ಜರುಗಿದ ೭೨ ‌ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. == ಜನನ == ಸೆಪ್ಟೆಂಬರ್ ೭, ೧೯೨೪ ರಲ್ಲಿ ರಾಯಚೂರು ಜಿಲ್ಲೆಯ ಹೆಂಬೇರಾಳು ಹಳ್ಳಿಯಲ್ಲಿ ಜನಿಸಿದರು. ಶಾಂತರಸರು ೧೩ ಎಪ್ರಿಲ್ ೨೦೦೮ರಂದು ನಿಧನರಾದರು. == ಜೀವನ == ಇವರ ತಂದೆ ಚನ್ನಬಸಯ್ಯ ಹಿರೇಮಠ - ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು. ಶಾಂತರಸ ಹಮ್‍ದರ್ದ್ ಸೊಸೈಟ್ ಆಫ್ ರಾಯಚೂರು ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ೧೯೮೧ರಲ್ಲಿ ಅದೇ ಸಂಸ್ಥೆಯ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾದರು. ೧೯೪೨ರ 'ಬ್ರಿಟಿಷರೆ, ಭಾರತ ಬಿಟ್ಟು ತೊಲಗಿ' ಅಭಿಯಾನ ನಡೆಯುತ್ತಿರುವಾಗ ಇವರು ಕವನ, ಕಥೆ ಬರೆಯಲು ಪ್ರಾರಂಭಿಸಿದ್ದು. ಇವರು ರಾಯಚೂರಿನಲ್ಲಿ "'ಸತ್ಯ ಸ್ನೇಹ "'ಪ್ರಕಾಶನವನ್ನು ಪ್ರಾರಂಭಿಸಿದ್ದಾರೆ. ಹಲವು ಗಝಲ್, ರುಬಾಯಿ, ಫರ್ದ್ ಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಶಾಂತರಸ ೪೬ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರು ೧೯೯೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಪಠ್ಯ ಪುಸ್ತಕ ಕಮಿಟಿಯಲ್ಲೂ ಸೇವೆ ಸಲ್ಲಿಸಿದ್ದಾರೆ. == ಕೃತಿಗಳು == === ಕವನ ಸಂಕಲನ === ಮಾನಸಗಳ್ಳಿ ಬಯಲು ಗಜಲ್ ಮತ್ತು ದ್ವಿಪದಿ ಸಮಗ್ರ ಕಾವ್ಯ === ಕಥಾ ಸಂಕಲನ === ಬಡೇಸಾಬು ಪುರಾಣ ನಾಯಿ ಮತ್ತು ಪಿಂಚಣಿ ಸ್ವಾತಂತ್ರ್ಯ ವೀರ ಮತ್ತು ಇತರ ಕಥೆಗಳು ಉರಿದ ಬದುಕು (ಆಯ್ದ ಕಥೆಗಳು) ಸಮಗ್ರ ಕಥೆಗಳು === ಕಾದಂಬರಿ === ಸಣ್ಣ ಗೌಡಸಾನಿ === ನಾಟಕ === ಸತ್ಯಸ್ನೇಹಿ ನಂಜು ನೊರೆವಾಲು ಮರೆಯಾದ ಮಾರಮ್ಮ ಶರಣ ಬಸವೇಶ್ವರ (ರೇಡಿಯೊ ನಾಟಕ) === ಜೀವನ ಚರಿತ್ರೆ === ಸಿದ್ಧರಾಮ (ಅಮರಾನಂದರೊಡನೆ ಸಹಲೇಖನ) ಆಯ್ದಕ್ಕಿ ಮಾರಯ್ಯ ದಂಪತಿಗಳು ನಾರದಗಡ್ಡೆ ಚೆನ್ನಬಸವ ಸ್ವಾಮಿಗಳು ಬಸರೀಗಿಡದ ವೀರಪ್ಪ ಕಲಬುರ್ಗಿಯ ದೊಡ್ಡಪ್ಪ ಅಪ್ಪ === ಪ್ರಬಂಧ === ಬಹುರೂಪ ಉಲಿವ ಮರ === ಸಂಶೋಧನೆ === ಬಸವಪೂರ್ವ ಯುಗದ ಶರಣರು ಮೊದಲ ವಚನಕಾರ ಮಾದಾರ ಚನ್ನಯ್ಯ ಎಡದೊರೆ ನಾಡಿನ ಅನುಭಾವಿ ಕವಿಗಳು ಬಳ್ಳಾರಿ ಜಿಲ್ಲೆಯ ಶಿವಶರಣರು === ಸಂಪಾದನೆ === ಸಂಗವಿಭು ವಿರಚಿತ ಮೂರು ಶತಕ ವೀರಭದ್ರ ಕವಿ ವಿರಚಿತ ಅರವತ್ತುಮೂರು ಪುರಾಣ ಕೂಡಲೂರು ಬಸವಲಿಂಗ ಶರಣರ ಸ್ವರವಚನಗಳು ಕಲ್ಲೂರು ಲಿಂಗಣ್ಣವೊಡೆಯ ವಿರಚಿತ ಬಾರಮಾಸ === ಸಂಕಲನ ಸಂಪಾದನೆ === ಮುಸುಕು ತೆರೆ (ವಿವಿಧ ಲೇಖಕರ ಕಥೆ,ಕವನ, ಪ್ರಬಂಧ ಸಂಕಲನ) ಕಲ್ಯಾಣದೀಪ (ಪ್ರಬಂಧಗಳು : ಅಮರಾನಂದರೊಡನೆ) ಬೆನ್ನ ಹಿಂದಿನ ಬೆಳಕು (೨೭ ಕವಿಗಳ ಕವನ ಸಂಕಲನ) ರಸಿಕ ಚಕ್ರಿ ಹರಿಹರದೇವ (ವಿಮರ್ಶಾತ್ಮಕ ಲೇಖನಗಳು : ಡಾ|ಬಿ.ಸಿ.ಜವಳಿಯವರೊಡನೆ) ನಮನ (ಎ.ಸಿ.ದೇವೇಗೌಡರ ಸಂಭಾವನಾ ಗ್ರಂಥ : ಡಿ.ಆರ್.ಬಳೂರಗಿಯವರೊಡನೆ) === ಅನುವಾದಗಳು === ಕಾಡಿನ ಬೇರು (ಅಮೃತ ಪ್ರೀತಂ ಅವರ ಕಥೆಗಳು). ಉಮರಾವ ಜಾನ ಅದಾ (ಉರ್ದು ಕಾದಂಬರಿಯ ಅನುವಾದ). == ಪುರಸ್ಕಾರ == ಇವರ ಸತ್ಯಸ್ನೇಹಿ ನಾಟಕಕ್ಕೆ ಕರ್ನಾಟಕ ಸರಕಾರದ ಪುರಸ್ಕಾರ ಲಭಿಸಿದೆ. == ಹೊರಗಿನ ಸಂಪರ್ಕಗಳು == ‌ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಬಗ್ಗೆ ನನ್ನ ಅಪ್ಪ–ಶಾಂತರಸ: ಭಾರತಿ ಮೋಹನ್‌ ಕೋಟಿ: ,14/05/2016